Select Page

ರಾಗಿ, ಕಬ್ಬು, ಸೂರ್ಯಕಾಂತಿ ಹೊಸ ತಳಿಗಳ ಸಂಶೋಧನೆ

ರಾಗಿ, ಕಬ್ಬು, ಸೂರ್ಯಕಾಂತಿ ಹೊಸ ತಳಿಗಳ ಸಂಶೋಧನೆ

ಮಂಡ್ಯದ ವಿ.ಸಿ. ಫಾರಂ ಸಂಶೋಧನಾ ಕೇಂದ್ರವು ಕಬ್ಬು ಸೇರಿ ವಿವಿಧ ಬೆಳೆಗಳ ಸುಧಾರಿತ ತಳಿಗಳನ್ನು ಸಿದ್ಧಪಡಿಸಿದೆ. ಸದ್ಯದಲ್ಲಿಯೇ ಅವುಗಳನ್ನು ಬಿಡುಗಡೆ ಮಾಡಲಿದೆ.

ಈಗಿರುವ ತಳಿಗಳಿಗಿಂತ ಉತ್ತಮ ಗುಣಮಟ್ಟ ಮತ್ತು ಅಧಿಕ ಇಳುವರಿಯನ್ನು ಈ ತಳಿಗಳಿಂದ ಬೆಳೆಯಬಹುದು ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿವೆ.

ಮಂಡ್ಯ ಕೃಷಿ ತರಬೇತಿ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಿದ್ದ ವಿವಿಧ ತಳಿಗಳ ತರಬೇತಿ ಕಾರ್ಯಕ್ರಮದಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ.

ಮಂಡ್ಯ ಜಿಲ್ಲೆಯ ವಿ.ಸಿ.ಫಾರಂನ ವಲಯ ಸಂಶೋಧನಾ ಕೇಂದ್ರದಿಂದ ಹೊಸ ತಳಿಗಳು ಬಿಡುಗಡೆಯಾಗಲಿವೆ.

ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂ

ಕಬ್ಬು ಸಿ.ಓ.ವಿ.ಸಿ-18061 ತಳಿ

ಕಬ್ಬು ತಳಿಯಲ್ಲಿ ಪ್ರಮುಖವಾಗಿ ವಿ.ಸಿ.ಎಫ್- 0517 ಕಬ್ಬು ತಳಿಯು ಶೇಕಡ 90 ರಷ್ಟು ಪ್ರದೇಶವನ್ನು ಅವರಿಸಿದೆ. ಹಾಗೂ ಸಿ.ಓ.ವಿ.ಸಿ-16061, ಸಿ.ಓ.ಎಫ್.ಸಿ-62, ಪ್ರಸ್ತುತ ಕಬ್ಬಿನ ತಳಿಯಾಗಿದೆ.

ಮುಂದಿನ ವರ್ಷಗಳಲ್ಲಿ ಸಿ.ಓ.ವಿ.ಸಿ-18061 ತಳಿಯನ್ನು ಬಿಡುಗಡೆ ಮಾಡಲಾಗುವುದು. ಈ ಕಬ್ಬಿನ ಒಂದು ಸಸಿಗೆ 7 ರೂಪಾಯಿ ಎಂದು ಸಂಶೋಧನಾ ಕೇಂದ್ರದ ಸಂಶೋಧನಾ ಸಹ ನಿರ್ದೇಶಕ ಡಾ. ಎಸ್.ಎನ್ ವಾಸುದೇವನ್ ತಿಳಿಸಿದ್ದಾರೆ.

ಲಡಕಾಸಿ ಸೈಕಲ್ ಗೂ ಕೆಲಸ ಕೊಟ್ಟ ಮಂಡ್ಯ ರೈತರು

ರಾಗಿ ಕೆ.ಎಂ.ಆರ್- 316 ತಳಿ

ಕಿರುಧಾನ್ಯಗಳಲ್ಲಿ ಒಂದಾದ ರಾಗಿ ತಳಿಯಲ್ಲಿ ಪ್ರಮುಖವಾಗಿ ಎಂ.ಆರ್-1, ಎಂ.ಆರ್-6, ಇಂಡಾಫ್-7, ಕೆ.ಎಂ.ಆರ್-204, ಕೆ.ಎಂ.ಆರ್-301, ಕೆ.ಎಂ.ಆರ್-340, ಕೆ.ಎಂ.ಆರ್- 630, ತಳಿಗಳನ್ನು ಈಗ  5 ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಮುಂದಿನ ವರ್ಷ ಕೆ.ಎಂ.ಆರ್- 316 ತಳಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಟಗರು ಸಾಕಿ ತಿಂಗಳಿಗೆ ಲಕ್ಷ ರೂ. ಆದಾಯ ಗಳಿಸುವ ರೈತ

ಸೂರ್ಯಕಾಂತಿ, ಭತ್ತ ಹೊಸ ತಳಿ

ಸೂರ್ಯಕಾಂತಿಯಲ್ಲಿ ಪ್ರಮುಖವಾಗಿ 5 ತಳಿಗಳನ್ನು ಸಂಶೋಧನೆ ಮಾಡಲಾಗಿದೆ. ಇದರಲ್ಲಿ 42 ರಿಂದ 45 ರಷ್ಟು ಎಣ್ಣೆ ಅಂಶವಿದೆ ಹಾಗೂ ಭತ್ತದ ತಳಿಯಲ್ಲಿ ಕೆ.ಆರ್.ಹೆಚ್.-4 ತಳಿಯನ್ನು ನಾಲ್ಕು ವರ್ಷಗಳ ಹಿಂದೆ ಸಂಶೋಧನೆ ಮಾಡಲಾಗಿದೆ.

ಎಂ.ಎಸ್.ಎನ್-99 ಎಂಬ ಹೊಸ ತಳಿಯನ್ನು ಮುಂದಿನ ವರ್ಷ ಬಿಡುಗಡೆ ಮಾಡಲಾಗುವುದು. ಜ್ಯೋತಿ ಭತ್ತದ ತಳಿಗೆ ಪರ್ಯಾಯವಾಗಿ ಕೆ.ಎಂ.ಎಫ್-220 ಎಂಬ ತಳಿಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಕುವೈತ್ ಕೆಲಸ ಬಿಟ್ಟು ಭಾರತದಲ್ಲಿ ಕೃಷಿಯನ್ನೇ ಮ್ಯೂಸಿಯಂ ಮಾಡಿದ ಕನ್ನಡಿಗ

ನವಣೆ ತಳಿಯಾದ ಜಿ.ಪಿ.ಯು.ಎಫ್ – 3 ತಳಿಯನ್ನು 10 ಜಿಲ್ಲೆಗಳಲ್ಲಿ ಕ್ಷೇತ್ರ ಪ್ರಯೋಗ ಮಾಡಲಾಗಿದೆ. ಸಾಮೆಯ ತಳಿ, ಬರಗು ತಳಿ, ನೆಲಗಡಲೆ, ಮೇವಿನ ಅಲಸಂದೆ, ಮುಸುಕಿನ ಜೋಳಗಳ ಬಗ್ಗೆಯೂ ಶೋಧನೆ ನಡೆಯುತ್ತಿವೆ.

Leave a reply

Your email address will not be published. Required fields are marked *