Categories: Agriculture

ತುಳಸಿ ಕೃಷಿ: ಒಂದೇ ಎಕರೆಯಲ್ಲಿ ಲಕ್ಷ ಲಕ್ಷ ಆದಾಯ

ಕೃಷಿಯಲ್ಲಿ ಹೊಸತನ ಮತ್ತು ಗ್ಯಾರಂಟಿ ಆದಾಯ ಹುಡುಕುತ್ತಿರುವವರಿಗೆ ಇಲ್ಲೊಂದು ಉಪಯುಕ್ತ ಮಾಹಿತಿ ಇದೆ. ಒಂದು ಲೀಟರ್ ಎಣ್ಣೆಗೆ 2000 ರೂಪಾಯಿ ವರೆಗೆ ದರ ಕೊಡುವ ತುಳಸಿ ಕೃಷಿ ಇತ್ತೀಚಿನ ರೈತರಿಗೆ ಯಶಸ್ಸು ತಂದುಕೊಡುತ್ತಿದೆ. ಪೂಜೆ ಮತ್ತು ಔಷಧವಾಗಿ ಬಳಸುವ ತುಳಸಿ ಬೆಳೆಯಲ್ಲೂ ರೈತರು ಲಾಭದಾಯಕ ಕೃಷಿ ಮಾಡಬಹುದು.

Tulasi agriculture

ಇದನ್ನೂ ಓದಿ: GOOD NEWS: ರೈತರಿಗೆ ಮತ್ತೊಂದು ಸಬ್ಸಿಡಿ ಯೋಜನೆ

ಔಷಧಿ ಸಸ್ಯಗಳ ಕೃಷಿಯಲ್ಲಿ ಹೆಚ್ಚಿನ ರೈತರು ಆಸಕ್ತಿ ತೋರುತ್ತಿದ್ದಾರೆ. ಅದರಲ್ಲಿ ಲಾಭ ಜಾಸ್ತಿ ಮತ್ತು ಬೇಡಿಕೆಯೂ ಅಧಿಕ ಎನ್ನುವುದು ವಿಶೇಷ. ಕೆಲ ರೈತರು ಹೆಕ್ಟೇರ್ ಗಟ್ಟಲೆ ಪ್ರದೇಶದಲ್ಲಿ ತುಳಸಿ ಬೆಳೆಯಲು ಶುರು ಮಾಡಿದ್ದಾರೆ. ಕರ್ನಾಟಕದಲ್ಲಿ ಅದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ.

ಇದನ್ನೂ ಓದಿ: ಬಿದಿರು ಕೃಷಿಯಲ್ಲಿದೆ ಭರಪೂರ ಆದಾಯ

ತುಳಸಿ ಎಣ್ಣೆಗೆ ಬೇಡಿಕೆ

ತುಳಸಿಯನ್ನು ಮರಳು ಮಿಶ್ರಿತ ಭೂಮಿಯಲ್ಲಿ ಬೆಳೆಯಬಹುದು. ತುಳಸಿ ಕೃಷಿ ಮಾಡುವ ಮೊದಲು ಗದ್ದೆಯಿಂದ ನೀರು ತೆಗೆದು ಸರಿಯಾದ ವ್ಯವಸ್ಥೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: ರೈತರ ಮಕ್ಕಳ ಶಿಷ್ಯವೇತನ: ಪಡೆಯುವುದು ಹೇಗೆ? ಪೂರ್ಣ ವಿವರ ಇಲ್ಲಿದೆ

ಒಸಿಮಮ್ ಬೆಸಿಲಿಕಮ್ ಎಂಬ ಜಾತಿಯ ತುಳಸಿಯನ್ನು ತೈಲ ಉತ್ಪಾದನೆಗಾಗಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಸುಗಂಧ ದ್ರವ್ಯಗಳು ಮತ್ತು ಔಷಧಿಗಳಿಗಾಗಿಯೂ ಈ ಜಾತಿಯ ತುಳಸಿಯ ಎಣ್ಣೆಯನ್ನು ಬಳಸಲಾಗುತ್ತದೆ.

ಕಾಸ್ಮೆಟಿಕ್ ಉದ್ಯಮದಲ್ಲಿ ತುಳಸಿ ಎಣ್ಣೆಗೆ ಹೆಚ್ಚಿನ ಬೇಡಿಕೆಯಿದೆ. ಜೂನ್-ಜುಲೈನಲ್ಲಿ ಬಿತ್ತಿದ ತುಳಸಿ ಬೆಳೆ ಚಳಿಗಾಲದ ಹೊತ್ತಿಗೆ ಉತ್ತಮ ಸ್ಥಿತಿಗೆ ಬರುತ್ತದೆ.

ಇದನ್ನೂ ಓದಿ: ಈರುಳ್ಳಿ ಹಳದಿ ರೋಗ ಭಾದೆ ನಿವಾರಣೆಗೆ ಕ್ರಮ

ಕೃಷಿ ಮಾಡುವುದು ಹೇಗೆ?

ತುಳಸಿ ಕೃಷಿ ಮಾಡುವ ಆಸಕ್ತಿ ಇರುವವರು ಹೆಚ್ಚಾಗಿ ಸೆಗಣಿ ಗೊಬ್ಬರವನ್ನು ಬಳಸುತ್ತಾರೆ. ಒಂದು ಹೆಕ್ಟೇರ್‌ನಲ್ಲಿ ಸುಮಾರು 20 ಟನ್ ಸೆಗಣಿ ಗೊಬ್ಬರವನ್ನು ಬಳಸಬೇಕು. ತುಳಸಿ ಬೀಜಗಳು ಅಥವಾ ಸಸ್ಯಗಳನ್ನು ನಾಟಿ ಮಾಡುವ ಪದ್ಧತಿ ಇದೆ. ನಾಟಿ ಮಾಡುವಾಗ ಪ್ರತೀ ಸಸ್ಯಗಳ ನಡುವೆ 10 ಸೆಂ.ಮೀ ಅಂತರ ಇರಬೇಕು.

ಇದನ್ನೂ ಓದಿ: ನ್ಯಾನೋ ಯೂರಿಯಾ ಬಳಸುವುದು ಹೇಗೆ ಗೊತ್ತೇ?

ತುಳಸಿ ಬೆಳೆದ ಕ್ಷೇತ್ರವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಸುಮಾರು 3 ರಿಂದ 4 ವಾರಗಳಲ್ಲಿ ಕಾಲಕಾಲಕ್ಕೆ ಕಳೆಯನ್ನು ಕೀಳುತ್ತಿರಬೇಕು. ಅದರಿಂದ ಕ್ಷೇತ್ರ ಉತ್ತಮವಾಗಿರುತ್ತದೆ.

ತುಳಸಿ ಎಣ್ಣೆಯ ಬೆಲೆ ಎಷ್ಟು?

ತುಳಸಿ ಗಿಡ ಚೆನ್ನಾಗಿ ಬೆಳೆದು ಸಿದ್ಧವಾದ ನಂತರ ಎಲೆಗಳನ್ನು ತೆಗೆಯಬೇಕು. ಭಟ್ಟಿ ಇಳಿಸುವ ವಿಧಾನದಿಂದ ತುಳಸಿ ಗಿಡ ಮತ್ತು ಎಲೆಗಳಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ.

ಸುಮಾರು ಒಂದು ಹೆಕ್ಟೇರ್‌ನಲ್ಲಿ 100 ಕೆಜಿಗಿಂತ ಹೆಚ್ಚು ಎಣ್ಣೆಯನ್ನು ಹೊರತೆಗೆಯಬಹುದು. ಕೊರೊನಾ ಅವಧಿಯಲ್ಲಿ ತುಳಸಿ ಎಣ್ಣೆಗೆ ಬೇಡಿಕೆ ಹೆಚ್ಚಿತ್ತು. ತುಳಸಿ ಬೆಳೆ ಸುಮಾರು 90 ದಿನಗಳಲ್ಲಿ ಸಿದ್ಧವಾಗುತ್ತದೆ. ಹಾಗಾಗಿ ನಿರಂತರ ಆದಾಯ ಗಳಿಸಬಹುದು.

admin

Recent Posts

ರೈತನ ಬಾಳಲ್ಲಿ ಜೀವಜಲ ತುಂಬಿದ ರಿಂಗ್ ಮಾಸ್ಟರ್ ನರೇಗಾ

ಉತ್ತರ ಕನ್ನಡಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ, ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ, ಸತತ…

5 months ago

PMAY: ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ

PMAYG ಪ್ರಧಾನ ಮಂತ್ರಿ ಆವಾಸ ಯೋಜನೆ. ಸರಕಾರಿ ಯೋಜನೆಯಡಿ ಮನೆ ಪಡೆಯಬೇಕು. ಸ್ವಂತ ಮನೆ House ಹೊಂದಬೇಕು ಎನ್ನುವವರಿಗೆ ಪ್ರಧಾನಿ…

2 years ago

ಬ್ಯೂಟಿ ಪಾರ್ಲರ್ ನಿರ್ವಹಣೆ ಉಚಿತ ತರಬೇತಿ

ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರುಡ್ ಸೆಟ್ ಸಂಸ್ಥೆ) ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತ…

2 years ago

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

2 years ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

3 years ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

3 years ago