ಕರ್ನಾಟಕ ವಾರ್ತೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಅಂಗವಾಗಿ 5 ದಿನಗಳ ಕಾಲ ನಡೆದ ವಿವಿಧ ತಳಿಯ ಜಾನುವಾರು ಪ್ರದರ್ಶನದಲ್ಲಿ ವೀರಾಪೂರದ ಫಕೀರಪ್ಪ ಚವಡಿ ಅವರ ಜೋಡೆತ್ತುಗಳು ಜಾತ್ರಾ ಚಾಂಪಿಯನ್ ಪಡೆದುಕೊಂಡವು.

ಮAಗಳವಾರ ಬಾಗಲಕೋಟೆ ನಗರದ ಹೊರವಲಯದ ಕಲಾದಗಿ ರಸ್ತೆಯ ಕೇಸನೂರ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಂಪಿಯನ್ ಆದ ಜೋಡೆತ್ತುಗಳಿಗೆ 11 ತೊಲಿ ಬೆಳ್ಳಿ ಖಡೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ವಿವಿಧ ರಾಸುಗಳಾದ ಹಾಲು ಹಲ್ಲಿನ ಹೋರಿ, ಎರಡು ಹಲ್ಲಿನ ಹೋರಿ, ನಾಲ್ಕು ಹಲ್ಲಿನ ಹೋರಿ, ಆರು ಹಲ್ಲಿನ ಹೋರಿ, ಜೋಡು ಎತ್ತುಗಳು, ಖಿಲ್ಹಾರಿ ಆಳಕುಗಳಿಗೆ ಪ್ರಥಮ 10 ತೊಲಿ ಬೆಳ್ಳಿ ಖಡೆ, ದ್ವಿತೀಯ 8 ತೊಲಿ ಬೆಳ್ಳಿ ಖಡೆ, ತೃತೀಯ 6 ತೊಲಿ ಬೆಳ್ಳಿ ಖಡೆ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.

ಬಿದಿರು ಕೃಷಿಯಲ್ಲಿದೆ ಭರಪೂರ ಆದಾಯ

ಹಾಲು ಹಲ್ಲಿನ ಹೋರಿ ಪ್ರದರ್ಶನದಲ್ಲಿ ನಕ್ಕರಗುಂದಿ ಗ್ರಾಮದ ಪರಸಪ್ಪ ಕುರಿ ಅವರ ಹೋರಿಗೆ (ಪ್ರಥಮ), ತುಳಸಿಗೇರಿಯ ಭೀಮಣ್ಣ ಜೈನಾಪೂರ (ದ್ವಿತೀಯ), ಶಿರೂರಿನ ಸಿದ್ದಪ್ಪ ಗಾಳಿ (ತೃತೀಯ) ಬಹುಮಾನ ಪಡೆಯಿತು.

ಗಂಗಾ-ಕಲ್ಯಾಣ ನೀರಾವರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಎರಡು ಹಲ್ಲಿನ ಹೋರಿ ಪ್ರದರ್ಶನದಲ್ಲಿ ಬಾಗಲಕೋಟೆಯ ಸಂಗಣ್ಣ ಯಮನಾಳ (ಪ್ರಥಮ), ನಿಂಗಾಪೂರದ ರಂಗಪ್ಪ ಮಾದರ (ದ್ವಿತೀಯ), ಸೀಮಿಕೇರಿಯ ತಮ್ಮಣ್ಣಪ್ಪ ಪಿಂಡರಕಿ (ತೃತೀಯ), ನಾಲ್ಕು ಹಲ್ಲಿನ ಹೋರಿ ಪ್ರದರ್ಶನದಲ್ಲಿ ಹುನಗುಂದನ ಪರಸಪ್ಪ ಆಲೂರ (ಪ್ರಥಮ), ಮುದ್ದೇಬಿಹಾಳದ ಸುಭಾಸ್ ಮಾದಗುಂಡಿ (ದ್ವತೀಯ), ನಿಂಗಾಪೂರದ ಮಹಾಂತೇಶ ಎಮ್ಮಿ ಅವರ ಹೋರಿ (ತೃತೀಯ) ಸ್ಥಾನ ಪಡೆದುಕೊಂಡವು.

ಡಯಾಬಿಟಿಸ್ ಸಮಸ್ಯೆ ನಿವಾರಿಸುವ ಯೋಗಭ್ಯಾಸಗಳು

ಆರು ಹಲ್ಲಿನ ಹೋರಿ ಪ್ರದರ್ಶನದಲ್ಲಿ ನಿಂಗಾಪೂರದ ಸಂಗಪ್ಪ ಸಂಗಮದ ಹೋರಿ (ಪ್ರಥಮ), ಜಮ್ಮನಕಟ್ಟಿಯ ನಿಂಗಪ್ಪ ಕೋಳ್ಳಿ (ದ್ವಿತೀಯ), ತುಳಸಿಗೇರಿಯ ಮಳಿಯಪ್ಪ ಕೆಂಗಲಗುತ್ತಿ (ತೃತೀಯ), ಜೋಡು ಎತ್ತುಗಳ ಪ್ರದರ್ಶನದಲ್ಲಿ ಹಿರೇಮಾಗಿಯ ಬಾಲಪ್ಪ ಹೊಸೂರ ಎತ್ತುಗಳು (ಪ್ರಥಮ), ಶಿರೂರಿನ ನಾಗಪ್ಪ ಅಚನೂರ (ದ್ವಿತೀಯ), ದಾದನಟ್ಟಿಯ ರಮೇಶ ರಾಜನಾಳ (ತೃತೀಯ), ಖಿಲ್ಹಾರಿ ಆಕಳು ಪ್ರದರ್ಶನದಲ್ಲಿ ಹಂಚಿನಾಳಿನ ವಿಠಲ ಅಂಬಿಗೇರ ಆಕಳು (ಪ್ರಥಮ), ಮುತ್ತಲದಿನ್ನಿಯ ಮಲ್ಲಪ್ಪ ಕಲ್ಲಾರಿ (ದ್ವಿತೀಯ) ಹಾಗೂ ಮನ್ನಿಕಟ್ಟಿ ಗ್ರಾಮದ ಪರಸಪ್ಪ ಕೊಳಮಲಿ ಆಕಳು (ತೃತೀಯ) ಸ್ಥಾನ ಪಡೆದುಕೊಂಡವು.

ರೈತರ ಮಕ್ಕಳ ಶಿಷ್ಯವೇತನ: ಪಡೆಯುವುದು ಹೇಗೆ? ಪೂರ್ಣ ವಿವರ ಇಲ್ಲಿದೆ