ಬೆಂಗಳೂರು: ವಿಧಾನಸೌಧದ ಬಳಿ ದಾಖಲೆಯಿಲ್ಲದ ₹10ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಎಇ ಜಗದೀಶ್ ಎಂಬುವವರ ಬಳಿ ₹10.5 ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ವಿಧಾನಸೌಧದ ಗೇಟ್ ಬಳಿ ತಪಾಸಣೆ ನಡೆಸುವ ವೇಳೆ ಎಇ ಜಗದೀಶ್ ಹತ್ತಿರ ದಾಖಲೆ ಇಲ್ಲದ ಹಣ ದೊರೆತಿದ್ದು, ಈ ಹಣ ನಿಮ್ಮ ಬಳಿ ಎಲ್ಲಿಂದ ಬಂತು ಎಂದು ಪೊಲೀಸರು ಜಗದೀಶ್ ಗೆ ಪ್ರಶ್ನಿಸಿದರು.

ಪೊಲೀಸರ ಪ್ರಶ್ನೆಗೆ ಉತ್ತರಿಸಿದ ಜಗದೀಶ್, ಇದು ಗುತ್ತಿಗೆದಾರರಿಗೆ ಕೊಡಬೇಕಾದ ಹಣ ಎಂದು ಹೇಳಿದ್ರು. ಮತ್ತೊಮ್ಮೆ ಇಲ್ಲ.. ಕೆಲವು ಬಿಲ್ ಗಳನ್ನು ಕ್ಲಿಯರ್ ಮಾಡುವುದಿತ್ತು ಆ ಬಿಲ್ ಗೆ ಸಂಬಂಧಿಸಿದ ಹಣ ಇದು ಎಂದು ಹೇಳ್ತಿದ್ರು. ಆದ್ರೆ ಬಿಲ್ ಗೆ ಸಂಭಂದ ಪಟ್ಟ ಯಾವುದೇ ದಾಖಲೆಗಳು ಅವರ ಬಳಿ ಇರಲಿಲ್ಲ.

ಈ ಸಂಬಂಧ ಕೇಸ್ ದಾಖಲಿಸಿಕೊಂಡ, ವಿಧಾನಸೌಧದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದ್ರೆ ಈ ಹಣ ಯಾರಾದ್ರು ಸಚಿವರಿಗೆ ಸೇರಿದ್ದಾ? ಅಂದ್ರೆ, ಕಮಿಷನ್ ರೂಪದಲ್ಲಿ ಸಚಿವರಿಗೆ ನೀಡಲು ಬಂದಿದ್ದ ಹಣ ಇದಾಗಿರಬಹುದಾ? ಎಂಬ ಅನುಮಾನಗಳನ್ನು ಮೂಡಿಸಿದೆ. ಇದಕ್ಕೆಲ್ಲ ಪೊಲೀಸ್ ತನಿಖೆಯಿಂದ ಉತ್ತರ ಸಿಗಬೇಕಿದೆ.