ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಜನರಿಗೆ ಮನೆಗಳಲ್ಲಿ ಉಳಿಯಲು ಸೂಚಿಸಲಾಗಿದೆ. ಆದರೆ ಹಿಂಗಾರು ಬೆಳೆಗಳ ಕೊಯ್ಲಿಗೆ ರೈತರು ಅನಿವಾರ್ಯವಾಗಿ ಕೆಲಸ ಮಾಡಬೇಕಾದ ಸಮಯವೂ ಎದುರಾಗಿದೆ.

ತೋಟಗಾರಿಕೆ ಬೆಳೆ ಮಾಡುವವರಂತೂ ಬಹಳ ಎಚ್ಚರಕೆಯಿಂದ ಕೆಲಸ ಮಾಡಬೇಕಾದ ಸ್ಥಿತಿ ಇದಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಕೃಷಿ ಉದ್ದೇಶಗಳಿಗಾಗಿ ವಿವಿಧ ರೂಪಗಳಿಂದ ವಿನಾಯಿತಿ ನೀಡಲಾಗಿದೆ. ಭಾರತ ಸರ್ಕಾರದ ಗೃಹ ಸಚಿವಾಲಯ ನೀಡಿದ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಕೃಷಿ ಕಾರ್ಯವನ್ನು ಪೂರ್ಣಗೊಳಿಸಬಹುದು.

ರೈತರು ಕೃಷಿ ಕೆಲಸವನ್ನು ಮಾಡುವಾಗ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಬೇಕು. ಇಂತಹ ಪರಿಸ್ಥಿತಿಯಲ್ಲಿ, ರೈತರು ಜಮೀನಿನಲ್ಲಿ ಸುರಕ್ಷಿತವಾಗಿ ಕೆಲಸ ಮಾಡಿದರೆ ಕೃಷಿ ನಷ್ಟವನ್ನು ಅನುಭವಿಸುವುದಿಲ್ಲ ಮತ್ತು ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಬಹುದು.

ಇದನ್ನೂ ಓದಿ: ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂವು

ರೈತರು ಹೊಲದಲ್ಲಿ ಕೆಲಸ ಮಾಡುವಾಗ, ಒಬ್ಬರಿಂದ ಒಬ್ಬರ ನಡುವೆ ನಾಲ್ಕು ಅಡಿ ಅಂತರ ಇರಬೇಕು. ಕೃಷಿ ಕಾರ್ಯವನ್ನು ಪೂರ್ಣಗೊಳಿಸಲು ಆತುರಪಡಬಾರದು. ಒಬ್ಬನೇ ಬೇಗನೆ ಮುಗಿಸಬಹುದಾದ ಕೆಲಸವನ್ನು ಬೇಗ ಮುಗಿಸಬೇಕು. ಅನೇಕ ಕಾರ್ಮಿಕರು ಏಕಕಾಲದಲ್ಲಿ ಕೆಲಸ ಮಾಡಬೇಕಾಗಿಲ್ಲ. ಸಂಯಮ ಕಳೆದುಕೊಳ್ಳದೆ ಈ ಕಷ್ಟದ ಸಮಯದಲ್ಲಿ ಸುರಕ್ಷಿತವಾಗಿರಲು ಆಧ್ಯತೆ ನೀಡಬೇಕು.

ಎಳನೀರ ಬಗ್ಗೆ ನಿಮಗೇನು ಗೊತ್ತು? ತೆಂಗು ಕೃಷಿಯಲ್ಲಿದೆ ಆದಾಯದ ಗುಟ್ಟು

ಹೊಲದಲ್ಲಿ ಕೆಲಸ ಮಾಡುವಾಗ, ರೈತರು ಸಾಬೂನಿನಿಂದ ಕೈ ತೊಳೆಯಬೇಕು ಎಂಬುದನ್ನು ನೆನಪಿನಲ್ಲಿಡಬೇಕು. ಇದಲ್ಲದೆ, ನೀವು ಗೊಬ್ಬರ ಅಥವಾ ಕೀಟನಾಶಕಕ್ಕೆ ಹೆಚ್ಚುವರಿಯಾಗಿ ಹೊಲದಲ್ಲಿ ಕೆಲವು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ ಅದು ಸ್ವಚ್ಚವಾಗಿರುವಂತೆ ಮಾಡಿ. ಅಪರಿಚಿತ ಕೆಲಸಗಾರನು ಜಮೀನಿಗೆ ಬಂದರೆ ಅವರನ್ನು ಜಮೀನಿಗೆ ಬರದಂತೆ ತಡೆಯಿರಿ.

ಟಗರು ಸಾಕಿ ತಿಂಗಳಿಗೆ ಲಕ್ಷ ರೂ. ಆದಾಯ ಗಳಿಸುವ ರೈತ

ರೈತರು ಬೆಳೆ ಬಿತ್ತನೆ ಮಾಡುವಾಗ ಅಥವಾ ಉಳುಮೆ ಮಾಡುವಾಗ ಯಂತ್ರಗಳನ್ನು ಬಳಸಲಾಗುತ್ತಿದೆ. ಅವುಗಳನ್ನು ಸ್ವಚ್ಚಗೊಳಿಸುವುದು ಅವಶ್ಯಕ. ಸಾಧ್ಯವಾದರೆ, ಯಂತ್ರವನ್ನು ಒಮ್ಮೆ ಬಳಸಿದ ನಂತರ, ಮತ್ತೆ ಬಳಸುವ ಮೊದಲು ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ.

ಇದನ್ನೂ ಓದಿ: ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂವು

ಬೆಳೆ ಕಟಾವು ಮಾಡುವಾಗಲೂ ಅಂತರ ಕಾಯ್ದುಕೊಳ್ಳಬೇಕು. ಕೊಯ್ಲು ಮಾಡಿದ ನಂತರ ಬೆಳೆ ಸಂಗ್ರಹಿಸುವಾಗ, ಅದನ್ನು ಹೊಸ ಚೀಲಗಳಲ್ಲಿ ತುಂಬಿಸುವುದನ್ನು ನೆನಪಿನಲ್ಲಿಡಿ. ಅಲ್ಲದೆ ಚೀಲಗಳನ್ನು ಬೇವಿನ ದ್ರಾವಣದಿಂದ ತೊಳೆದು ನಂತರ ತುಂಬಿಸಿ. ರೈತರು ಬೆಳೆ ಉತ್ಪನ್ನವನ್ನು ಮಾರುಕಟ್ಟೆಗೆ ಕೊಂಡೊಯ್ಯುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.