ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ತ್ರಿವಿಕ್ರಮ ಚಿತ್ರ ಇನ್ನೂ ರಿಲೀಸೇ ಆಗಿಲ್ಲ. ಆಗಲೇ ಚಿತ್ರದ ಡೈಲಾಗ್ ಭಾರೀ ವೈರಲ್ ಆಗುತ್ತಿದೆ. ಕೊರೊನಾ ಬಿಸಿಯನ್ನೂ ಮೀರಿಸಿ ಟಿಕ್ ಟಾಕ್ ಗಳಲ್ಲಿ ಆ ಡೈಲಾಗ್ ಭರ್ಜರಿ ಫೇಮಸ್ ಆಗಿದೆ.

ಕಾರ್ಯಕ್ರಮವೊಂದರಲ್ಲಿ ಆ್ಯಂಕರ್ ಅನುಶ್ರಿ ಅವರ ಕೋರಿಕೆಯಂತೆ ವಿಕ್ರಮ ಹೇಳಿದ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಆ ಡೈಲಾಗ್ ಕೇಳಿದರೆ ನೀವೂ ಥ್ರಿಲ್ ಆಗುತ್ತೀರಿ.
“ಕೆಲವು ಹುಡುಗೀರು ರೇಂಜ್ ನೋಡಿ ಲವ್ ಮಾಡ್ತಾರೆ. ಆದರೆ, ನಮ್ಮಂಥ ಹುಡುಗರು ಲವ್ ನ ರೇಂಜಲ್ಲಿ ಮಾಡ್ತಾರೆ’ ಅನ್ನೋ ಸೂಪರ್ ಡೈಲಾಗ್ ಯುವಕರ ಮನಸ್ಸು ಗೆದ್ದಿದೆ. ಹುಡುಗಿಯರು ಸಹ ಈ ಡೈಲಾಗ್ ಮೆಚ್ಚಿ ಟಿಕ್ ಟಾಕ್ ಮಾಡಿ ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ವಿಡಿಯೊ ನೋಡಿ

ಸಕ್ಸಸ್ ಡೈರಕ್ಟರ್ ಸಹನಾಮೂರ್ತಿ ನಿರ್ದೇಶನದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ. ಸಿನಿಮಾಗಳಲ್ಲೇ ಪ್ರೇಮಲೋಕ ತೋರಿಸುವ ರವಿಚಂದ್ರನ್ ಅವರ ಚಿತ್ರಗಳೇ ಹೇಗಿರುತ್ತವೆ ಎಂದು ನೋಡಿದ್ದೇವೆ. ಇನ್ನು ಅವರ ಮಗನ ಚಿತ್ರವೂ ಅಂಥದ್ದೇ ಕುತೂಹಲದೊಂದಿಗೆ ಸಿದ್ಧವಾಗುತ್ತಿದೆ.

ಇದನ್ನೂ ಓದಿ: ಹಿರೋಯಿನ್ ಆದರು ಸಂತೂರ್ ಮಮ್ಮಿ.

ವಿದೇಶ ಮತ್ತು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದ ಪೋಸ್ಟರ್ ಸಹ ಭಿನ್ನವಾಗಿ ಗಮನಸೆಳೆಯುತ್ತಿವೆ. ಸಂತೂರ್ ಮಮ್ಮಿ ಅಕಾಂಕ್ಷ ಶರ್ಮಾ ಈ ಚಿತ್ರದಲ್ಲಿ ಹಿರೋಯಿನ್ ಆಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ. ಚಿಕ್ಕಣ್ಣ ಸಹ ಚಿತ್ರದ ಆಕರ್ಷಣೆಯಾಗಿದ್ದಾರೆ.

ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ಧಾರಾಳವಾಗಿ ದೇಣಿಗೆ ನೀಡಿದ ತೆಲಗು ಚಿತ್ರ ತಾರೆಯರು.

ಪ್ರೀತಿ ಕುರಿತಾಗಿ ಇರುವ ಚಿತ್ರ ಇದಾಗಿದೆ. ಮೂರು ವರ್ಗದ ಜನರ ಪ್ರೀತಿಯ ಕತೆಗಳನ್ನು ಚಿತ್ರದಲ್ಲಿ ಪೋಣಿಸಲಾಗಿದೆ. ಕುಟುಂಬ ಸಮೇತ ಎಲ್ಲರೂ ನೋಡಬಹುದಾದ ಚಿತ್ರ. ಪ್ರೀತಿ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತ ಅಲ್ಲ, ಬಡವರು, ಮಧ್ಯಮ ವರ್ಗದಲ್ಲಿಯೂ ನಡೆಯುತ್ತವೆ. ಅವೆಲ್ಲವುಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಎಲ್ಲರೂ ಮನಸ್ಸು ಮುಟ್ಟುವಂತೆ ಚಿತ್ರ ಸಿದ್ಧವಾಗುತ್ತಿದೆ ಎಂದು ನಿರ್ದೇಶಕ ಸಹನಾಮೂರ್ತಿ ಅವರು ದಿ ಸ್ಟೇಟ್ ನೆಟ್ವರ್ಕ್ ನೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.