ಪಶ್ಚಿಮ ಬಂಗಾಳ: ತಾಯಿಯ ಅಂತ್ಯಕ್ರಿಯೆ ನೇರವೇರಿಸಿದ ಕೆಲವೇ ಗಂಟೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಕರ್ತವ್ಯದಲ್ಲಿ ಭಾಗಿಯಾಗಿದ್ದಾರೆ.

ಹೌದು ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಇಂದು ‘ಭಾರತ್ ಒಂದೇ’ ರೈಲಿಗೆ ‌‌‌‌‌‌ಚಾಲನೆ ನೀಡಬೇಕಿತ್ತು. ಆದ್ರೆ ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಆಸ್ಪತ್ರೆಯಲ್ಲಿ ಹೀರಾಬೇನ್ ಮೋದಿಯವರು ಕೊನೆಯುಸಿರೆಳೆದಿದ್ದಾರೆ. ಆದ್ರೆ ತಾವು ಹೋಗಬೇಕಿದ್ದ ಕಾರ್ಯಕ್ರಮ ನಿಲ್ಲಬಾರದೆಂದು ಭಾವಿಸಿದ ಮೋದಿಯವರು, ಅಹ್ಮದಾಬಾದ್ ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತ್ ಒಂದೇ ರೈಲಿಗೆ ಚಾಲನೆ ನೀಡಿದರು.

ದೀದಿಯಿಂದ ಪ್ರಧಾನಿಯವರಿಗೆ ಕೃತಜ್ಞತೆ

ತಮ್ಮ ದುಃಖದ ಸಂದರ್ಭದಲ್ಲಿಯೂ ಕರ್ತವ್ಯದಲ್ಲಿ ಭಾಗಿಯಾಗಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು. ಇದೇ ವೇಳೆ ಮೋದಿಯವರ ತಾಯಿ ಹೀರಾಬೇನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದರು.