ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಆರು ತಿಂಗಳು ಡ್ಯಾನ್ಸ್, ಫೈಟ್ ಮಾಡಂಗಿಲ್ಲ. ಸಿನಿಮಾ ಶೂಟಿಂಗ್ ವೇಳೆಯಲ್ಲಿ ಪೆಟ್ಟು ಮಾಡಿಕೊಂಡಿದ್ದ ಶ್ರೀಮುರಳಿ ಅವರು ಇಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಇನ್ನು ಆರು ವಾರಗಳ ಕಾಲ ಫುಲ್ ರೆಸ್ಟ್ ತೆಗೊಬೇಕು ಎಂದು ಡಾಕ್ಟರ್ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದಾರೆ.

ಶೂಟಿಂಗ್ ಗೆ ಬ್ರೇಕ್, ಅಭಿಮಾನಿಗಳಿಂದ ಪ್ರಾರ್ಥನೆ

ಬಹು ನಿರೀಕ್ಷಿತ ‘ಬಘೀರ’ ಸಿನಿಮಾಗೆ ಶ್ರೀಮುರಳಿ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಇಮಾಡಿಕೊಂಡಿದ್ದ ಶ್ರೀಮುರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ‌‌ಎಡ ಭಾಗದ ಮೊನಕಾಲಿಗೆ ಬಲವಾಗಿ ಪೆಟ್ಟು ಬಿದ್ದ ಕಾರಣ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಡಾ. ಶಂಕರ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಪರೇಷನ್ ಸಕ್ಸಸ್ ಆಗಿದೆ. ಸದ್ಯ ಆಸ್ಪತ್ರೆಯಲ್ಲಿ ವಿಶ್ರಾಂಂತಿ ಪಡೆಯುತ್ತಿದ್ದು, ಇನ್ನು ಮೂರು ದಿನಗಳ ಕಾಲ ಡಿಸ್ಚಾರ್ಜ್ ಆಗೋ ಹಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ

ಆರು ತಿಂಗಳು ಫುಲ್ ರೆಸ್ಟ್.. ‌ಮಾಡಂಗಿಲ್ಲ ಫೈಟ್, ಡ್ಯಾನ್ಸ್

ಇನ್ನು ಆರು ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಿರೋ ವೈದ್ಯರು, ಡ್ಯಾನ್ಸ್, ಫೈಟ್ ಮಾಡಂಗಿಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರ ‘ಬಘೀರ’ ಸಿನಿಮಾ ತಂಡಕ್ಕೆ ತಲೆನೋವಾಗಿದೆ. ಕಳೆದ ಒಂದುವರೆ ವರ್ಷದಿಂದ ಈ ಸಿನಿಮಾದಲ್ಲಿ ಶ್ರೀಮುರಳಿ ಕೆಲಸ ಮಾಡುತ್ತಿದ್ದು, ಇನ್ನು 40 ದಿನಗಳ ಶೂಟಿಂಗ್ ಬಾಕಿ ಉಳಿಸಿಕೊಂಡಿದ್ದಾರೆ.

ಈಗ ಫೈಟ್, ಡ್ಯಾನ್ಸ್ ಮಾಡಂಗಿಲ್ಲ ಅನ್ನೋದೆ ಚಿತ್ರ ತಂಡಕ್ಕೆ ತಲೆಬಿಸಿಯಾಗಿದೆ. ಕಳೆದ ವಾರ ರಾಕ್ ಲೈನ್ ಸ್ಟುಡಿಯೋದಲ್ಲಿ ಶೂಟಿಂಗ್ ನಡಿತಾಯಿತ್ತು. ಸ್ಟಂಟ್ ಮಾಸ್ಟರ್ ಚೇತನ್ ಡಿಸೋಜಾ ನೇತೃತ್ವದಲ್ಲಿ ಶ್ರೀಮುರಳಿ ಫೈಟಿಂಗ್ ಅಭ್ಯಾಸ ಮಾಡ್ತಾ ಇದ್ರು. ಈ ವೇಳೆ ಆಯತಪ್ಪಿ ಬಿದ್ದು ಕಾಲಿಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಗಾಯ ಗಂಭೀರವಾಗಿದ್ದ ಹಿನ್ನೆಲೆ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಮದಗಜದಲ್ಲೂ ಆಗಿತ್ತು ಪೆಟ್ಟು, ರೆಸ್ಟ್

ಈ ಹಿಂದೆ ಮದಗಜ ಸಿನಿಮಾ ಶೂಟಿಂಗ್ ವೇಳೆಯೂ ಶ್ರೀಮುರಳಿ ಎಡ ಕಾಲಿಗೆ ಪೆಟ್ಟಾಗಿತ್ತು. ಆ ಸಂದರ್ಭದಲ್ಲಿಯೂ ಶ್ರೀಮುರಳಿ ಅವರಿಗೆ 20 ದಿನಗಳ ಕಾಲ ವಿಶ್ರಾಂತಿ ಹೇಳಿದರು. ಈ ಬಾರಿಯೂ ಅದೇ ಎಡೆ ಕಾಲಿಗೆ ಪೆಟ್ಟಾಗಿದ್ದು, ಆರು ವಾರಗಳ ಕಾಲ ಫುಲ್ ರೆಸ್ಟ್ ಮಾಡಬೇಕಿದೆ. ಇನ್ನು ಡಿಸ್ಚಾರ್ಜ್ ಆದ ಬಳಿಕ ವಾಕಿಂಗ್​ ಮತ್ತು ರನ್ನಿಂಗ್​ ಮಾಡಬೇಕು, ಡ್ಯಾನ್ಸ್​ ಮತ್ತು ಫೈಟಿಂಗ್​ ದೃಶ್ಯಗಳಲ್ಲಿ ನಟಿಸದೇ ಇರುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಶ್ರೀಮುರಳಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಬಹು ನಿರೀಕ್ಷಿತ ಸಿನಿಮಾ ಬಘೀರ

ಹಲವು ಕಾರಣಗಳಿಂದಾಗಿ ‘ಬಘೀರ’ ಸಿನಿಮಾ ಮೇಲೆ ಬಹಳಷ್ಟು ನಿರೀಕ್ಷೆ ಮೂಡಿದೆ. ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಜೊತೆಗೆ ಸ್ಟಾರ್​ ಡೈರೆಕ್ಟರ್​ ಪ್ರಶಾಂತ್​ ನೀಲ್​ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದು, ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ಗಳು ಮಾಸ್​ ಆಗಿವೆ. ಇನ್ನು ಶೀರ್ಷಿಕೆ ಕೂಡ ಡಿಫರೆಂಟ್​ ಆಗಿದ್ದು, ಶ್ರೀಮುರಳಿ ಅಭಿಮಾನಿಗಳು ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.