ಸ್ತ್ರೀ ಸಮಸ್ಯೆಗಳಿಗೆ ಪರಿಹಾರ ನೀಡುವ ಕನ್ಯೆಯಮ್ಮ

ಇತ್ತೀಚೆಗೆ ವೈದ್ಯಲೋಕಕ್ಕೆ ಸವಾಲಾಗುವ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ವೈದ್ಯಲೋಕಕ್ಕೂ ಮಿಗಿಲಾದ ಕೆಲ ಸಮಸ್ಯೆಗಳಿಗೆ ದೈವಲೋಕದಲ್ಲಿ ಪರಿಹಾರ ಕಂಡುಕೊಳ್ಳುವ ನಂಬಿಕೆ ಭಾರತೀಯರಲ್ಲಿದೆ. ಅಂಥದ್ದೇ ಶಕ್ತಿಯುಳ್ಳ ಓಕಳಿ ಹೊಂಡದ ಕನ್ಯೆಯಮ್ಮ ಸಂತಾನ, ಋತುಮತಿ ತೊಂದರೆ ಸೇರಿದಂತೆ ಸ್ತ್ರೀಯರಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾಳೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನೆಬೈಲ್ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಓಕಳಿ ಹೊಂಡದ ಕನ್ಯೆಯಮ್ಮ ನೆಲೆಸಿದ್ದಾಳೆ. ಹೆಣ್ಣು ಮಕ್ಕಳು ಸಕಾಲದಲ್ಲಿ ಋತುಮತಿಯಾಗದೆ ಇದ್ದರೆ, ಓಕಳಿ ಹೊಂಡದ ಕನ್ಯೆಯಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿ, ಗುಡಿ ಪಕ್ಕದ ಕೆರೆಯ ನೀರಿನಿಂದ ತೀರ್ಥಸ್ನಾನ ಮಾಡಿದರೆ ಋತುಮತಿಯಾಗುತ್ತಾರೆ ಎಂಬ ನಂಬಿಕೆ ತಲೆತಲಾಂತರಗಳಿಂದ ನಡೆದುಬರುತ್ತಿದೆ.

ಅಂಕೋಲಾದಿಂದ 8.5 ಕಿ.ಮೀ. ದೂರದ ಹೊನ್ನೆಬೈಲ್ ಗ್ರಾಮದ ಕೆಳಗಿನ ಮಂಜಗುಣಿ ರಸ್ತೆಯ ಪಕ್ಕದ ಕಾಲು ದಾರಿಯ ಮೂಲಕ ಸಾಗಿ ಭತ್ತದ ಗದ್ದೆ ಬಯಲಿನ ಒಂದು ಬದಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಚಿಕ್ಕದೊಂದು ಗುಡಿ ಕಂಡುಬರುತ್ತದೆ. ಇದುವೇ ಕನ್ಯೆಯಮ್ಮ ದೇವಿಯ ಗುಡಿ. ಅದರ ಪಕ್ಕದಲ್ಲಿರುವ ಕೆರೆಗೆ ‘ಓಕಳಿ ಹೊಂಡ’ ಎನ್ನುತ್ತಾರೆ. ಆ ಹೊಂಡದಲ್ಲಿ ಸಿಕ್ಕಿರುವ ಕನ್ಯೆಯಮ್ಮ ದೇವಿಗೆ ಓಕಳಿ ಹೊಂಡದ ಕನ್ಯೆಯಮ್ಮ ಎಂದು ಕರೆಯುತ್ತಾರೆ. ಈ ಕೆರೆಯ ನೀರೇ ಪವಿತ್ರತೆಗೆ ಹೆಸರಾಗಿದೆ.

ಸಂತಾನ ಕರುಣಿಸುವ ಕನ್ಯೆಯಮ್ಮ :

ಕನ್ಯೆಯಮ್ಮ ಸಂತಾನ ಕರುಣಿಸುವ ದೇವಿಯಾಗಿಯೂ ಹೆಸರಾಗಿದ್ದಾಳೆ. ಸಂತಾನ ಭಾಗ್ಯಕ್ಕಾಗಿ 10-15 ವರ್ಷಗಳಿಂದ ವೈದ್ಯಕೀಯ ಚಿಕಿತ್ಸೆಗಾಗಿ ಅಲೆದಾಡಿ ಫಲ ಕಾಣದೇ ಹತಾಶರಾದ ಅನೇಕರು ಹಿತೈಷಿಗಳ ಸಲಹೆ ಮೇರೆಗೆ ಕನ್ಯೆಯಮ್ಮ ದೇವಿ ಬಳಿ ಬಂದು ಐದು ಸೋಮವಾರ ತೀರ್ಥಸ್ನಾನ ಮಾಡಿ ಸಂತಾನ ಭಾಗ್ಯ ಕಂಡಿದ್ದಾರೆ. ಇದಕ್ಕೆ ಅರ್ಚಕರು ಹಾಗೂ ಸುತ್ತಲಿನ ಜನ ಹಲವಾರು ನಿದರ್ಶನಗಳನ್ನು ನೀಡುತ್ತಾರೆ. ಇಷ್ಟಾರ್ಥ ನೆರವೇರಿದ ಬಳಿಕ ಪುನಃ ಇಲ್ಲಿಗೆ ಬಂದು ದೇವಿಗೆ ಹರಕೆ ಒಪ್ಪಿಸಿ ಕೃತಾರ್ತರಾಗುತ್ತಾರೆ.

ಕನ್ಯೆಯಮ್ಮ

ಪ್ರತಿ ಸೋಮವಾರ ವಿಶೇಷ ಪೂಜೆ :

ಕನ್ಯೆಯಮ್ಮ ದೇವಿಗೆ ಪ್ರತಿ ಸೋಮವಾರದ ದಿನ ಪೂಜೆ ನಡೆಯುತ್ತದೆ. ಈ ದಿನ ಭಕ್ತರ ಸಂಖ್ಯೆಯೂ ಹೆಚ್ಚಿರುತ್ತದೆ. ಭಕ್ತರು ದೇವಿಗೆ ಹಣ್ಣು-ಕಾಯಿಯೊಂದಿಗೆ ವಿಶೇಷವಾಗಿ ತೀರ್ಥಸ್ನಾನಕ್ಕೆ ನೀರು ಕೆಂಪಗಾಗಲು ಕುಂಕುಮ ತರಬೇಕು. ನೀರು ಕೆಂಪಾದಷ್ಟು ಕನ್ಯೆಯಮ್ಮ ಪ್ರಸನ್ನಳಾಗಿ ಇಷ್ಟಾರ್ಥವನ್ನು ನೇರವೇರಿಸುತ್ತಾಳೆ ಎಂದು ಇಲ್ಲಿಯ ಅರ್ಚಕ ವಾಸುದೇವ ಮೋನಪ್ಪ ನಾಯ್ಕ ಹೇಳುತ್ತಾರೆ.

ಸ್ತ್ರೀ ರೋಗ ತಜ್ಞರು ಓಕಳಿ ಹೊಂಡದ ನೀರಿನಲ್ಲಿ ಪ್ಲ್ಯಾಂಟ್ ಹಾರ್ಮೋನುಗಳು ಚರ್ಮದ ಮೂಲಕ ದೇಹ ಸೇರಿ ಋತುಮತಿ ಆಗುವಂತೆ ಸಹಕರಿಸಲು ಸಾಧ್ಯವಿದೆ ಎಂದು ಹೇಳುತ್ತಾರೆ. ಮನೋವಿಜ್ಞಾನಿಗಳ ಪ್ರಕಾರ ದೇಹ ಮತ್ತು ಮನಸ್ಸು ಪರಸ್ಪರ ನಿಕಟ ಸಂಬಂಧ ಹೊಂದಿರುವುದರಿಂದ ನಂಬಿಕೆಯು ಮಾನಸಿಕ ಸಿದ್ಧತೆಯನ್ನು ಉಂಟುಮಾಡಿ ದೈಹಿಕ ಬದಲಾವಣೆಗಳು ಆಗಲು ಸಾಧ್ಯವಿದೆ. ಇದಕ್ಕೆ ಪರಿಸರವೂ ಉತ್ತೇಜನಕಾರಿಯಾಗಬಲ್ಲದು ಎನ್ನುತ್ತಾರೆ.

ಅರ್ಚಕರ ಸಂಪರ್ಕ ಮಾಹಿತಿ: 7892043253, 7676718987, 9980294014

ಲೇಖನ, ವಿಡಿಯೊ, ಚಿತ್ರ:

ದರ್ಶನ ಹರಿಕಾಂತ, ಶಿಕ್ಷಕರು, ಬಿಳಗಿ.

admin

Recent Posts

ರೈತನ ಬಾಳಲ್ಲಿ ಜೀವಜಲ ತುಂಬಿದ ರಿಂಗ್ ಮಾಸ್ಟರ್ ನರೇಗಾ

ಉತ್ತರ ಕನ್ನಡಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ, ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ, ಸತತ…

6 months ago

PMAY: ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ

PMAYG ಪ್ರಧಾನ ಮಂತ್ರಿ ಆವಾಸ ಯೋಜನೆ. ಸರಕಾರಿ ಯೋಜನೆಯಡಿ ಮನೆ ಪಡೆಯಬೇಕು. ಸ್ವಂತ ಮನೆ House ಹೊಂದಬೇಕು ಎನ್ನುವವರಿಗೆ ಪ್ರಧಾನಿ…

2 years ago

ಬ್ಯೂಟಿ ಪಾರ್ಲರ್ ನಿರ್ವಹಣೆ ಉಚಿತ ತರಬೇತಿ

ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರುಡ್ ಸೆಟ್ ಸಂಸ್ಥೆ) ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತ…

2 years ago

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

2 years ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

3 years ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

3 years ago