Select Page

ಜಂಗಮರಿಗೆ ಅಳಿವಿಲ್ಲ…. ಸಿದ್ದೇಶ್ವರ ಶ್ರೀಗಳಿಗೆ ಸ್ಮಾರಕವಿಲ್ಲ…

ಜಂಗಮರಿಗೆ ಅಳಿವಿಲ್ಲ…. ಸಿದ್ದೇಶ್ವರ ಶ್ರೀಗಳಿಗೆ ಸ್ಮಾರಕವಿಲ್ಲ…

ವಿಜಯಪುರ: ‘ನಡೆದಾಡುವ ದೇವರು’ ಎಂದೇ ಪ್ರಸಿದ್ಧಿ ಪಡೆದಿದ್ದ ಸಿದ್ದೇಶ್ವರ ಶ್ರೀಗಳು ಇಂದು ಸಂಜೆ ಜ್ಞಾನಯೋಗಾಶ್ರಮದಲ್ಲಿ ಲಿಂಗೈಕ್ಯರಾಗಿದ್ದಾರೆ.

ಸಾಮಾನ್ಯವಾಗಿ ಶ್ರೀಗಳು, ಸ್ವಾಮಿಜಿಗಳು ಲಿಂಗೈಕ್ಯರಾದರೆ ಅವರ ದೇಹವನ್ನು ಮಣ್ಣಿನಲ್ಲಿ ಹೂಳಲಾಗುತ್ತದೆ. ಆದ್ರೆ ಸಿದ್ದೇಶ್ವರ ಶ್ರೀಗಳು ತಮ್ಮ ದೇಹವನ್ನು ಯಾವುದೇ ಕಾರಣಕ್ಕೂ ಮಣ್ಣಿನಲ್ಲಿ ಹೂಳಬಾರದು. ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿ, ನಂತರ ಚಿತಾಭಸ್ಮವನ್ನು ನದಿಯಲ್ಲಿ ‌‌‌‌‌‌‌‌‌ವಿಸರ್ಜಿಸಬೇಕು.ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು ಎಂದು ಶ್ರೀಗಳು 2014ರಲ್ಲೆ ಪತ್ರ ಬರೆಯಿಸಿ ಇಟ್ಟಿದ್ದರು.

ಹೀಗಾಗಿ ಶ್ರೀಗಳ ಉಯಿಲು ಪತ್ರದ ಅನುಸಾರ ಅಂತಿಮ ವಿಧಿ ವಿಧಾನಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಸುತ್ತೂರು ಶ್ರೀಗಳು ತಿಳಿಸಿದರು.

Leave a reply

Your email address will not be published. Required fields are marked *