Categories: Yoga

ಆಸ್ತಮಾ ನಿವಾರಣೆಗೆ ರಾಮಬಾಣ ಅರ್ಧ ಮತ್ಸೇಂದ್ರಾಸನ

ಕೊರೊನಾ ಬಂದ ಮೇಲೆ ಆಸ್ತಮಾ ರೋಗಿಗಳ ಸಮಸ್ಯೆ ಅಪಾಯಕಾರಿಯಾಗುತ್ತಿದೆ. ಉಸಿರಾಟ ಸಮಸ್ಯೆ, ಅಲರ್ಜಿ, ಉರಿಯೂತ, ಊದಿಕೊಳ್ಳುವುದು, ಶ್ವಾಸಕೋಶದ ಸಮಸ್ಯೆಗಳೆಲ್ಲವು ಆಸ್ತಮಾದಲ್ಲಿ ಸಾಮಾನ್ಯವಾಗಿದೆ.

ಆಸ್ತಮಾ ಸಮಸ್ಯೆ ಇದ್ದವರು ಪಶ್ಚಾತಾಪ ಪಡದೆ, ನೀವು ಪಡೆದುಕೊಳ್ಳುತ್ತಿರುವ ಚಿಕಿತ್ಸೆಯ ಜತೆಯಲ್ಲಿಯೇ ಯೋಗದ ಮೂಲಕ ಅದನ್ನು ನಿವಾರಣೆ ಮಾಡಿಕೊಳ್ಳಬಹುದು. ಅರ್ಧ ಮತ್ಸೇಂದ್ರಾಸನ ಅಭ್ಯಾಸ ಆಸ್ತಮಾ ರೋಗ ನಿವಾರಣೆಗೆ ಅತ್ಯಂತ ಪರಿಣಾಮಕಾರಿಯಾಗಿದೆ.

ಅರ್ಧ ಮತ್ಸೇಂದ್ರಾಸನ ಎಂಬ ಪದದಲ್ಲಿ ಅರ್ಧ, ಮತ್ಸೇ, ಇಂದ್ರ ಎಂಬ ಮೂರು ಪದಗಳು ಸೇರಿವೆ. ಅರ್ಧ ಎಂದರೆ ಅರ್ಧ, ಮತ್ಸೇ ಅಂದರೆ ಮೀನು, ಇಂದ್ರ ಎಂದರೆ ಪ್ರಜ್ಞೆ  ಎಂಬ ಅರ್ಥವನ್ನು ಸೂಚಿಸುತ್ತದೆ.

ಮಾಡುವ ವಿಧಾನ:

1) ನಿಮ್ಮ ಬೆನ್ನು ಮತ್ತು ಕತ್ತನ್ನು ನೇರವಾಗಿಸಿ ಕಾಲನ್ನು ಮುಂದೆ ಚಾಚಿ ಕುಳಿತುಕೊಳ್ಳಿ.

2) ಎಡಗಾಲನ್ನು ಮಡಚಿ, ನಿಮ್ಮ ಎಡಗಾಲಿನ ಹಿಮ್ಮಡಿಯನ್ನು ಬಲ ಪ್ರಷ್ಠದ ಬದಿಗೆ ಇರಿಸಿ.

3) ಬಲಪಾದವನ್ನು ಎಡ ಮಂಡಿಯ ಹೊರಗೆ ಇರಿಸಿ. ಈಗ ನಿಮ್ಮ ಎಡ ಮೋಣಕೈಯನ್ನು ಬಲ ಮಂಡಿಯ ಹೊರಗೆ ಇರಿಸುತ್ತಾ ಎಡಗೈ ಹಸ್ತದಿಂದ ಬಲ ಪಾದವನ್ನು ಹಿಡಿದುಕೊಳ್ಳಿ ಹಾಗೆ ಬಲಗೈ ಹಿಂದೆ ಇಡಿ.

4) ಉಸಿರನ್ನು ಹೊರ ಹಾಕುತ್ತಾ (ರೇಚಕ) ನಿಮ್ಮ ಹೊಟ್ಟೆ, ಕತ್ತು ಮತ್ತು ಭುಜದ ಭಾಗವನ್ನು ಹಿಂದಕ್ಕೆ ತಿರುಗಿಸಿ ಬೆನ್ನು ನೇರವಾಗಿರಲಿ. ಅದೇ ದಿಕ್ಕಿನಲ್ಲಿ ನೋಡುತ್ತಾ 30 ಸೆಕೆಂಡುಗಳ ಕಾಲ ಇರಿ.

5) ಈಗ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಒಂದೊಂದೇ ಅಂಗಗಳನ್ನು ಬಿಡುಗಡೆಗೊಳಿಸಿ ಮೊದಲನೆಯ ಸ್ಥಿತಿಗೆ ಬಂದು ಇನ್ನೊಂದು ಬದಿಗೆ ಪುನರಾವರ್ತಿಸಿ.

ಪ್ರಯೋಜನಗಳು:

1) ಆಸ್ತಮ ಕಾಯಿಲೆ ನಿವಾರಣೆಗೆ ರಾಮಬಾಣ ಇದ್ದಂತೆ.

2) ಋತುಚಕ್ರದ ಸಮಸ್ಯೆ ನಿವಾರಿಸುತ್ತದೆ.

3) ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ.

4) ಲಿವರ್ ಮತ್ತು ಮೂತ್ರಪಿಂಡಕ್ಕೆ ಅತ್ಯಂತ ಉತ್ತಮವಾದ ಆಸನ.

5) ದೇಹವನ್ನು ಸಡಿಲಗೊಳಿಸಲು ಸಹಾಯವಾಗುತ್ತದೆ.

6) ಬೆನ್ನುಮೂಳೆ ಯನ್ನು ಉದ್ದಿಪನಗೊಳಿಸಿ ಅದನ್ನು ಶಕ್ತಿಯುತ ಗೊಳಿಸುತ್ತದೆ.

ಎಚ್ಚರಿಕೆ:

ನೀವು ಯಾವುದೇ ರೀತಿಯ ಬೆನ್ನುಮೂಳೆಯ ಅಥವಾ ಹೊಟ್ಟೆಯ ಭಾಗದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಈ ಆಸನ ಮಾಡಬಾರದು.

admin

Share
Published by
admin
Tags: ganeshyoga

Recent Posts

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

3 months ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

1 year ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

1 year ago

ನಿತ್ಯ ಬೆಳ್ಳುಳ್ಳಿ ಸೇವಿಸುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು

ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಲವು ವಿಧದ ಔಷಧೀಯ ಗುಣಗಳೂ ಇದರಲ್ಲಿ ಕಂಡುಬರುತ್ತವೆ. ಆಹಾರದ ರುಚಿಯನ್ನು…

1 year ago

ಸ್ಯಾಂಡಲ್ ವುಡ್ ಕ್ಯೂಡ್ ಜೋಡಿ ಸಿಂಹಪ್ರಿಯ ಅರಿಶಿನ ಶಾಸ್ತ್ರದ ಫೋಟೋಸ್

ಸ್ಯಾಂಡಲ್​ವುಡ್​​ ಕ್ಯೂಡ್​ ಜೋಡಿಗಳಲ್ಲಿ ಒಂದಾದ ಸಿಂಹಪ್ರಿಯರ ಕಲ್ಯಾಣಕ್ಕೆ ಮುಹೂರ್ತ ಕೌಂಟ್‌ಡೌನ್ ಶುರುವಾಗಿದ್ದು, ಇಂದು ಅರಿಶಿನ ಶಾಸ್ತ್ರ ನೆರವೇರಿದೆ. ಅರಿಶಿನ ಶಾಸ್ತ್ರದ…

1 year ago

ಖಾಕಿ ಕಣ್ತಪ್ಪಿಸಲು 20kg ತೂಕ ಇಳಿಸಿದ್ದ ಕಳ್ಳ: ಕನ್ಫ್ಯೂಸ್ ಆದ ಪೊಲೀಸ್ರು ಮುಂದೆನಾಯ್ತು..?

ಬೆಂಗಳೂರು: ಸಿನಿಮಾಗಾಗಿ ತೂಕ ಇಳಿಸುವುದು, ಪಿಟ್ ಆಗಿ ಕಾಣಿಸಲು ವರ್ಕ್ ಔಟ್ ಮಾಡಿ ಸಣ್ಣ ಆಗೋದು ಇವೆಲ್ಲ ಕಾಮನ್. ಆದ್ರೆ,…

1 year ago