Categories: Yoga

ಯೋಗ ಎಂದರೇನು?

ಯೋಗ ಎನ್ನುವುದು ಒಂದು ದಿನ ಮಾಡುವ ಕಾಯಕವಲ್ಲ. ಈ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುವುದು. ಜೊತೆಗೆ ಈ ಮಹತ್ವವಾದ ಯೋಗವನ್ನು ದಿನಕ್ಕೆ ಒಮ್ಮೆ ಆದರೂ ಅಳವಡಿಸಿಕೊಂಡರೆ ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿ ಟ್ಟುಕೊಳ್ಳಬಹುದು.

ಬೆಳಗ್ಗೆ ಬೇಗ ಏಳುವುದೂ ಒಂದು ಯೋಗವೇ. ಸೂರ್ಯೋದಯದ ವೇಳೆಗೆ ಏಳುವುದರಿಂದಲೂ ಅರ್ಧ ಯೋಗ ಮಾಡಿದಷ್ಟು ಉಪಯೋಗ ಆಗುತ್ತದೆ. ಮಕ್ಕಳು ಬುದ್ಧಿವಂತರಾಗಬೇಕು. ವಯಸ್ಸಾದ ಮೇಲೆ ಸೊಂಟ, ಮೈ ನೋವು ಬರಬಾರು ಎಂದು ಹತ್ತಾರು ಔಷಧ ಬಳಸುತ್ತಾರೆ. ಅದರ ಪರಿಣಾಮ ಏನು ಎನ್ನುವುದು ಕೊರೊನಾ ವೈರಸ್ ಗೊತ್ತು ಮಾಡಿದೆ.

ಬುದ್ಧಿ, ದೇಹ, ಮನಸ್ಸು ಎಲ್ಲವನ್ನು ನಿಯಂತ್ರಿಸಿ ಆರೋಗ್ಯ ಕೊಡುವ ಶಕ್ತಿ ಯೋಗದಲ್ಲಿದೆ. ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಇದು ಭಾರತದ ಶಕ್ತಿ. ಅದನ್ನು ಮರಳಿ ಸ್ಥಾಪಿಸೋಣ.

ಯೋಗವೆಂದರೆ ‘ಜೋಡಿಸು’ ‘ಸೇರಿಸು’ ‘ಕೂಡಿಸು’ ಎಂಬ ಆರ್ಥ ಬರುತ್ತದೆ. ಯೋಗವೆಂದರೆ ‘ಸಮಾದಿ’ ‘ಉಪಾಯ’ ‘ಸಾಧನ’ ಎಂಬ ಅರ್ಥವೂ ಬರುತ್ತದೆ. ಯೋಗದಲ್ಲಿ ದೇಹದ ಜೊತೆ ಮನಸ್ಸು, ಬುದ್ದಿ , ಭಾವನೆ, ಆತ್ಮ ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ.

ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ. “ಯೋಗೋ ಉಪಾಯ ಉದ್ದಿಷ್ಟ:” ಮೋಕ್ಷಕ್ಕೆ ಉತ್ತಮ ಉಪಾಯ ಯೋಗ. ಪತಂಜಲಿ ಮಹರ್ಷಿಗಳು ಯೋಗ ಎಂದರೆ “ಯೋಗಶ್ಚಿತ್ತ ವೃತ್ತಿ ನಿರೋಧ:” ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿಸುವುದು ಯೋಗದ ಉದ್ದೇಶ.

ಋಷಿ ಪತಂಜಲಿಯವರು ಯೋಗದಲ್ಲಿ ಎಂಟು ಅಂಗಗಳನ್ನು ತಿಳಿಸಿದ್ದಾರೆ. ಅವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.

ಸೂಕ್ಷ್ಮ ವ್ಯಾಯಾಮ
ಯಾವುದೇ ರೀತಿಯ ಯೋಗಾಸನ ಹಾಗೂ ಸೂರ್ಯ ನಮಸ್ಕಾರ ಮಾಡುವ. ಮೊದಲು ಸೂಕ್ಷ್ಮ ವ್ಯಾಯಾಮ ಮಾಡುವುದು ಅತ್ಯಂತ ಅವಶ್ಯಕ ಈ ಸೂಕ್ಷ್ಮ ವ್ಯಾಯಾಮ ಮಾಡುವುದರಿಂದ ನಮ್ಮ ದೇಹದಲ್ಲಿನ ಎಲ್ಲಾ ಕೀಲುಗಳು ಸಡಿಲ ಗೊಳ್ಳುತ್ತದೆ. ಇದರಿಂದ ನಮ್ಮಲ್ಲಿ flexibility ಹೆಚ್ಚಿಸುತ್ತದೆ.

ದೇಹವು ಹಗುರ ಹಾಗೂ ಸಡಿಲ ಗೊಳ್ಳುತ್ತದೆ. ಹಾಗೆ ಕೀಲುಗಳು ಸಮಸ್ಯೆ ಬರದೆ ಇರುವ ಹಾಗೆ ತಡೆಗಟ್ಟಬಹುದು. ನಮ್ಮ ದೇಹದ ಎಲ್ಲಾ ಕೀಲುಗಳಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಕೀಲುಗಳು ಬಿಗಿತವನ್ನು ಸಡಿಲ ಗೊಳಿಸುತ್ತದೆ. ಈ ವ್ಯಾಯಾಮವನ್ನು ಸುಲಭವಾಗಿ ಆರಂಭಿಸೋಣ.

ಶ್ರೀ ಗಣೇಶ
ಯೋಗ ತರಬೇತುದಾರ

admin

Share
Published by
admin

Recent Posts

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

3 months ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

1 year ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

1 year ago

ನಿತ್ಯ ಬೆಳ್ಳುಳ್ಳಿ ಸೇವಿಸುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು

ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಲವು ವಿಧದ ಔಷಧೀಯ ಗುಣಗಳೂ ಇದರಲ್ಲಿ ಕಂಡುಬರುತ್ತವೆ. ಆಹಾರದ ರುಚಿಯನ್ನು…

1 year ago

ಸ್ಯಾಂಡಲ್ ವುಡ್ ಕ್ಯೂಡ್ ಜೋಡಿ ಸಿಂಹಪ್ರಿಯ ಅರಿಶಿನ ಶಾಸ್ತ್ರದ ಫೋಟೋಸ್

ಸ್ಯಾಂಡಲ್​ವುಡ್​​ ಕ್ಯೂಡ್​ ಜೋಡಿಗಳಲ್ಲಿ ಒಂದಾದ ಸಿಂಹಪ್ರಿಯರ ಕಲ್ಯಾಣಕ್ಕೆ ಮುಹೂರ್ತ ಕೌಂಟ್‌ಡೌನ್ ಶುರುವಾಗಿದ್ದು, ಇಂದು ಅರಿಶಿನ ಶಾಸ್ತ್ರ ನೆರವೇರಿದೆ. ಅರಿಶಿನ ಶಾಸ್ತ್ರದ…

1 year ago

ಖಾಕಿ ಕಣ್ತಪ್ಪಿಸಲು 20kg ತೂಕ ಇಳಿಸಿದ್ದ ಕಳ್ಳ: ಕನ್ಫ್ಯೂಸ್ ಆದ ಪೊಲೀಸ್ರು ಮುಂದೆನಾಯ್ತು..?

ಬೆಂಗಳೂರು: ಸಿನಿಮಾಗಾಗಿ ತೂಕ ಇಳಿಸುವುದು, ಪಿಟ್ ಆಗಿ ಕಾಣಿಸಲು ವರ್ಕ್ ಔಟ್ ಮಾಡಿ ಸಣ್ಣ ಆಗೋದು ಇವೆಲ್ಲ ಕಾಮನ್. ಆದ್ರೆ,…

1 year ago