Categories: Agriculture

ಭಾರತದಲ್ಲಿ ಕೃಷಿ ಮಾಡಲು ಮಲೇಶಿಯಾ ಬಿಟ್ಟು ಬಂದ ದಂಪತಿ

ಭಾರತದ ನೆಲವೇ ಅಂತದ್ದು. ಎಲ್ಲಿಯೇ ಹೋದರೂ ಇಲ್ಲಿನ ಮಣ್ಣಿನ ಸೆಳೆತ ಎಂಥವರನ್ನೂ ಆಕರ್ಷಿಸಿ ಮಡಿಲಲ್ಲಿಟ್ಟು ಸಲಹುತ್ತದೆ. ಇಲ್ಲಿರುವ ಕೃಷಿ ಕತೆಯೂ ಅಂಥದ್ದೇ.  ಭಾರತಾಂಬೆಯ ನೆಲದಲ್ಲಿ ಕೃಷಿ ಮಾಡಬೇಕು ಎಂದು ಆ ದಂಪತಿ ಮಲೇಶಿಯಾದಿಂದ ಸ್ವದೇಶಕ್ಕೆ ಬಂದು ಇಂದು ಯಶಸ್ವಿ ಕೃಷಿಕರಾಗಿದ್ದಾರೆ. ಈ ಅಪರೂಪದ ಕೃಷಿಕ ದಂಪತಿಯ ಕತೆ ಇಲ್ಲಿದೆ.

ಮಲೇಶಿಯಾದಲ್ಲಿ ಕೈತುಂಬಾ ಸಂಬಳ,  ಸ್ವಂತ ಮನೆಯಿತ್ತು.  ಸತಿಪತಿಗಳಿಬ್ಬರು 20 ವರ್ಷ ಪ್ರೊಪೆಸರ್ ಆಗಿ ಕೆಲಸ ಮಾಡುತ್ತಿದ್ದರೂ ಮಣ್ಣಿನ ಸೆಳೆತ ಅವರನ್ನು ಭಾರತದತ್ತ ಕರೆ ತಂದಿದೆ. ಅವರೇ ಬೆಳಗಾವಿಯ ನಿವಾಸಿ ಜ್ಯೋತಿ ಮತ್ತು ವಿಶ್ವನಾಥ ಕಳ್ಳಿಮನಿ ದಂಪತಿ.
ಮಲೇಶಿಯಾದಲ್ಲಿದ್ದಾಗಲೇ ಕೃಷಿ ಯೋಜನೆ ರೂಪಿಸಿದ ದಂಪತಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪಕ್ಕ ಸಂತಿಬಸ್ತವಾಡ ಎನ್ನುವ ಗ್ರಾಮದಲ್ಲಿ ಮೂರು ವರ್ಷದ ಹಿಂದೆ ಐದು ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ಸಮಗ್ರ ಕೃಷಿ ಮಾಡುತ್ತಿದ್ದಾರೆ.
ಇವರಿಗೆ ಖಾನಾಪುರದ ನಂದಹಳ್ಳಿಯಲ್ಲಿ 12 ಎಕರೆ ಜಮೀನು ಇದೆ. ಅಲ್ಲಿ ಕಬ್ಬು ಮತ್ತು ಮರ ಆಧಾರಿತ ಕೃಷಿ ಮಾಡುತ್ತಿದ್ದಾರೆ. ಇವರ ಪತಿ ವಿಶ್ವನಾಥ ಅವರು ಕೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ಪ್ರೊಪೆಸರ್ ಆಗಿದ್ದಾರೆ. ಜ್ಯೋತಿ ಅವರು ಕೃಷಿ ನೋಡಿಕೊಳ್ಳುತ್ತಾರೆ. ಇವರಿಬ್ಬರು ಎಂಜಿನಿಯರ್ ಪದವೀಧರರು.

ಆಡುಗಳೊಂದಿಗೆ ಜ್ಯೋತಿ ಕಳ್ಳಿಮನಿ ಅವರು.

ಸಮಗ್ರ ಕೃಷಿಯೇ ಆಧಾರ
ಬಹುಬೆಳೆ,  ಉಪಕಸಬುಗಳು, ನಾವಿನ್ಯತೆಯ ಪ್ರಯೋಗ , ವನಾಧಾರಿತ ಬೇಸಾಯ ಇವೆಲ್ಲವೂ ಇವರ ಜಮೀನಿನಲ್ಲಿ ಕಾಣಬಹುದು. ಬಹಳ ಆಸಕ್ತಿಯಿಂದ ದಂಪತಿ ಕೃಷಿಯಲ್ಲಿನ ಸುತ್ತಮುತ್ತಲಿನ ಸಾಧಕರನ್ನು ಹಾಗೂ ಅಧ್ಯಯನ ಪ್ರವಾಸಗಳನ್ನು ನೋಡಿಕೊಂಡು ಸೂಕ್ತವಾದವುಗಳನ್ನು ಅಳವಡಿಸಿಕೊಂಡಿದ್ದಾರೆ. ಇವರ ತೋಟದಲ್ಲಿ 100 ಮಾವು, 60 ತೆಂಗು, ಬಾಳೆ, ನೇರಳೆ, ನೆಲ್ಲೆ, ಪೇರಲ, ಹುಣಸೆ, ಬಿದಿರು ಹೀಗೆ ವೈವಿಧ್ಯಮಯ ಮರಗಳನ್ನು ಕಾಣಬಹುದಾಗಿದೆ. ಬೆಳೆಗಳಿಗೆ ಜೀವಾಮೃತವನ್ನು ಹಾಗೂ ಔಷಧಿಯಾಗಿ ಬೇವಿನ ಲೇಪವನ್ನು ನೀಡುತ್ತಾರೆ. ಹನಿ ನೀರಾವರಿ ಮೂಲಕ ನೀರೂಣಿಸುತ್ತಾರೆ.

ಹೈನುಗಾರಿಕೆ ಉಪಕಸಬು
ಇವರು ಉಪಕಸಬುಗಳಾಗಿ ಆಡು  ಮತ್ತು ಕೋಳಿ ಸಾಕಾಣಿಕೆಯನ್ನು ಮಾಡಿಕೊಂಡಿದ್ದಾರೆ. 16 ಆಡುಗಳನ್ನು 50 ಸಾವಿರಕ್ಕೆ ಕೊಂಡುತಂದಿದ್ದಾರೆ. ಆಡಿನಿಂದ ಪಡೆದ ಗೊಬ್ಬರವನ್ನು ಸಹ ಇವರು ಆದಾಯವಾಗಿ ಮಾರ್ಪಡಿಸಿಕೊಂಡಿದ್ದಾರೆ. 50 ಕೆ.ಜಿಗೆ 300 ರೂಪಾಯಿಯಂತೆ ಆಡಿನ ಗೊಬ್ಬರವನ್ನು ಮಾರಾಟ ಮಾಡುತ್ತಾರೆ. ಒಟ್ಟಾರೆ ಆಡಿನಿಂದ ವರ್ಷಕ್ಕೆ 40 ಸಾವಿರ ರೂ. ಆದಾಯ ಬರುತ್ತಿದೆ.
ಕಡಕನಾಥ ಕೋಳಿ ಸಾಕಿದ್ದು ಒಂದು ಮೊಟ್ಟೆಗೆ 10 ರೂ. ಒಂದಕ್ಕೆ 100 ರೂಪಾಯಿಯಂತೆ ತಂದ ಕೋಳಿಯನ್ನು ಐದು ತಿಂಗಳ ನಂತರ 300 ರೂಪಾಯಿಗೆ ಒಂದರಂತೆ ಆದಾಯದ ನೀರಿಕ್ಷೆಯಲ್ಲಿದ್ದಾರೆ.

ಎರೆ ಹುಳು ತೊಟ್ಟಿ
ಫಾರ್ಮ ಹೌಸ ಪಕ್ಕದಲ್ಲಿ ಎರೆಹುಳು ತೊಟ್ಟಿ ನಿರ್ಮಿಸಿಕೊಂಡು ಸಾವಯವ ಗೊಬ್ಬರ ತಯಾರಿಸುತ್ತಿದ್ದಾರೆ. ಅದನ್ನು ತಮ್ಮ ಜಮೀನುಗಳಿಗೆ ಬಳಸಿಕೊಳ್ಳುತ್ತಿದ್ದಾರೆ.  ಮಲೇಶಿಯಾದಲ್ಲಿ ಪ್ರೊಪೆಸರ್ ಆಗಿದ್ದರೂ ಈ ಯಾವ ಕೆಲಸದಲ್ಲಿಯೂ ಅವರಿಗೆ ಹಿಂಜರಿಕೆ ಇಲ್ಲ.

ಇವರು ಒಂದು ಕುಟುಂಬ ಬದುಕಲು ಬೇಕಾದ ಜೀವನೋಪಯೋಗಿ ಕೃಷಿ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ . ಇವರ ಉತ್ಸಾಹ ಕೃಷಿ ಯಾವ ಉನ್ನತ ಹುದ್ದೆಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸುತ್ತದೆ.
ಒಟ್ಟಾರೆ ಅವರು ಜಮೀನು ಸಮತಟ್ಟು, ಸಸಿ ನಾಟಿ ಎಲ್ಲ ಸೇರಿ ಕೃಷಿಗೆ 25 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಅದರಿಂದ ಅವರಿಗೆ ವಾರ್ಷಿಕ ಎಂಟು ಲಕ್ಷ ರೂ. ಆದಾಯ ಬರುತ್ತಿದೆ. ಇನ್ನೂ ಹಲವು ಯೋಜನೆಗಳನ್ನು ಅವರು ಕೃಷಿಯಲ್ಲಿ ಅಳವಡಿಸುತ್ತಿದ್ದಾರೆ.

ನಾವು ಆರೋಗ್ಯವಂತರಾಗಿರಲು ಈ ಕೃಷಿಯೇ ನಮಗೆ ಬೆನ್ನೆಲಬು.ಇದರಮೂಲವೇ ನಾವು ಜೀವನ ಕಂಡುಕೊಳ್ಳಬೇಕು ಎನ್ನುವ ಹಠ ನಮ್ಮನ್ನು ಇಂದು ಈ ಕೃಷಿ ಮಾಡಿಸಿದೆ. ಇನ್ನೂ ಅನೇಕ ಯೋಜನೆಗಳು ಹಂತಹಂತವಾಗಿ ಮಾಡಬೇಕಿದೆ.

ಜ್ಯೋತಿ ಕಳ್ಳಿಮನಿ, ಮಲೇಶಿಯಾದಿಂದ ಬಂದು ಕೃಷಿ ಮಾಡುತ್ತಿರುವ ಪ್ರೊ.

ಚಿತ್ರ ಲೇಖನ:  ರುದ್ರ ವಿ.ಪಿ.

admin

View Comments

Recent Posts

ರೈತನ ಬಾಳಲ್ಲಿ ಜೀವಜಲ ತುಂಬಿದ ರಿಂಗ್ ಮಾಸ್ಟರ್ ನರೇಗಾ

ಉತ್ತರ ಕನ್ನಡಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ, ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ, ಸತತ…

3 months ago

PMAY: ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ

PMAYG ಪ್ರಧಾನ ಮಂತ್ರಿ ಆವಾಸ ಯೋಜನೆ. ಸರಕಾರಿ ಯೋಜನೆಯಡಿ ಮನೆ ಪಡೆಯಬೇಕು. ಸ್ವಂತ ಮನೆ House ಹೊಂದಬೇಕು ಎನ್ನುವವರಿಗೆ ಪ್ರಧಾನಿ…

1 year ago

ಬ್ಯೂಟಿ ಪಾರ್ಲರ್ ನಿರ್ವಹಣೆ ಉಚಿತ ತರಬೇತಿ

ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರುಡ್ ಸೆಟ್ ಸಂಸ್ಥೆ) ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತ…

2 years ago

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

2 years ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

3 years ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

3 years ago